ಚಂದನ್ – ನಿವೇದಿತಾ ಗೌಡ ಡಿವೋರ್ಸ್; ಒಂದೇ ದಿನಕ್ಕೆ ಇವರಿಗೆ ಡಿವೋರ್ಸ್ ಹೇಗೆ ಸಿಕ್ಕಿತು?

ಸ್ಯಾಂಡಲ್ವುಡ್ ನ ಕ್ಯೂಟ್ ಕಪಲ್ ಆಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ವಿಚ್ಛೇದನ ತೆಗೆದುಕೊಂಡಿದ್ದಾರೆ ಎಂಬುದು ಎಲ್ಲರಿಗೂ ಶಾಕಿಂಗ್ ನ್ಯೂಸ್ ಆಗಿದೆ. ಹಲವಾರು ಹಿಟ್ ಹಾಡುಗಳನ್ನು ನೀಡಿದ ಚಂದನ್ ಶೆಟ್ಟಿ ಮತ್ತು ಹಲವಾರು ರಾಜಾ ರಾಣಿ ಶೋ ನಲ್ಲಿ ಮಿಂಚಿದ ದಂಪತಿಗಳು ಡೈವೋರ್ಸ್ ತೆಗೆದುಕೊಂಡ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

WhatsApp Group Join Now
Telegram Group Join Now

ಚಂದನ್ ಶೆಟ್ಟಿ ಅವರ ಹಿನ್ನೆಲೆ :- ಇವರು ಹುಟ್ಟಿದ್ದು. 17 ಸೆಪ್ಟೆಂಬರ್ 1989 ರಂದು ಹಾಸನ ಜಿಲ್ಲೆಯ ಹೊಳೆನರಸೀಪುರ ಊರಿನಲ್ಲಿ ಜನಿಸಿದ್ದರು. ಇವರು ನಟ ಮತ್ತು ಸಂಗೀತ ನಿರ್ದೇಶಕ ಹಾಗೂ ಗಿಟಾರ್ ವಾದಕ ಜೊತೆಗೆ ಡ್ರಮ್ಮರ್ ಮತ್ತು ರಾಪರ್ ಗಾಯಕ ಕೂಡಾ ಆಗಿದ್ದರೆ. ಧ್ರುವ ಸರ್ಜಾ ಅವರು ನಟಿಸಿದ ಪೊಗರು ಚಿತ್ರದ ಕರಾಬು ಹಾಡಿನ ಸಂಗೀತ ನಿರ್ದೇಶನದ ಜೊತೆಗೆ ಹಾಡನ್ನು ಹಾಡಿದ್ದಾರೆ. ಈ ಹಾಡು ಸೂಪರ್ ಹಿಟ್ ಆಗಿದೆ. ಪಾರ್ಟಿ ಸಾಂಗ್ ಗೆ ಇವರು ಫೇಮಸ್ ಆಗಿದ್ದಾರೆ. ಮುಂಗಾರು ಮಳೆ 2 ಫಿಲ್ಮ್ ನ ಮೈ ಡ್ಯಾಡಿ ಸಾಂಗ್ ಸಹ ಇವರು ಹಾಡಿದ್ದಾರೆ. ತಾಯಿಗೆ ತಕ್ಕ ಮಗ, ಅಂಜನಿ ಪುತ್ರ, ಪಡ್ಡೆ ಹುಲಿ, ಕಿಸ್ ಹೀಗೆ ಇನ್ನಷ್ಟು ಹಾಡುಗಳಿಗೆ ಧ್ವನಿ ಆಗಿದ್ದಾರೆ.

ನಿವೇದಿತಾ ಗೌಡ ಅವರ ಹಿನ್ನೆಲೆ :- ನಿವೇದಿತಾ ಗೌಡ ಅವರು ಮೇ 12 1998 ರಲ್ಲಿ ಮೈಸೂರಿನಲ್ಲಿ ಜನಸಿದವರು. ಟಿಕ್ ಟಾಕ್ ಮೂಲಕ ಫೇಮಸ್ ಆಗಿದ್ದ ಇವರು ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ತಮ್ಮದೇ ವಿಭಿನ್ನ ಮಾತಿನ ಶೈಲಿಯಿಂದ ಕರ್ನಾಟಕದ ಮನೆ ಮನೆಗೂ ಪರಿಚಿತರಾದವರು.

ಬಿಗ್ ಬಾಸ್ 5 ರ ಸ್ಪರ್ಧಿಗಳು :-

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರು ಸಹ ಬಿಗ್ ಬಾಸ್ 8 ರ ಸ್ಪರ್ಧಿಗಳು. ಇಬ್ಬರು ಬಿಗ್ ಬಾಸ್ ಮನೆಯಲ್ಲಿ ಅಣ್ಣ, ತಂಗಿ ಎಂದು ಹೇಳಿದ್ದರು. ಆದರೂ ಸಹ ಜನರು ಇವರು ಲವ್ ನಲ್ಲಿ ಇದ್ದರೆ ಎಂದು ಹೇಳುತ್ತಿದ್ದರು. ಅದರಂತೆಯೇ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ 2020 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಂತರ ಇವರು ಗಗನಸಖಿ ಆಗಿ ಕೂಡಾ ಕೆಲಸ ಮಾಡಿದ್ದರು. ಬಣ್ಣದ ಲೋಕದಲ್ಲಿ ನೆಲೆಯಿರಬೇಕು ಎಂದು ರಾಜಾ ರಾಣಿ ಮತ್ತು ಗಿಚ್ಚಿ ಗಿಲಿ ಗಿಲಿ ಶೋ ನ ಸ್ಪರ್ಧಿ ಆಗಿದ್ದರು.

2019 ರ ಯುವ ದಸರಾದಲ್ಲಿ ನಿವೇದಿತಾ ಗೆ ಪ್ರೇಮ ನಿವೇದನೆ ಮಾಡಿದ ಚಂದನ್ :- 2019 ರ ಯುವ ದಸರಾದ ವೇದಿಕೆಯಲ್ಲಿ ಇಡೀ ರಾಜ್ಯದ ಜನರ ಎದುರು ಇಬ್ಬರ ತಂದೆ ತಾಯಿಯ ಸಮ್ಮುಖದಲ್ಲಿ ನಿವೇದಿತಾ ಅವರಿಗೆ ತಮ್ಮ ಪ್ರೇಮ ನಿವೇದನೆ ಮಾಡಿದ್ಕೊಂಡಿದ್ದರು. ಇದು ಬಹಳ ಚರ್ಚೆಗೆ ಕಾರಣ ಆಗಿತ್ತು. ಹಲವಾರು ಜನರು ಟೀಕೆ ವ್ಯಕ್ತ ಪಡಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಡೈವೋರ್ಸ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ :- ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಡೈವೋರ್ಸ್ ಪಡೆದುಕೊಂಡಿದ್ದೇವೆ. ಇದು ಇಬ್ಬರ ಒಮ್ಮತದ ನಿರ್ಧಾರ. ಇಲ್ಲಿಯ ವರೆಗೆ ನಮ್ಮ ಜೀವನದ ಪ್ರತಿ ಹಂತದಲ್ಲಿ ಜೊತೆಯಾಗಿ ಇರುವ ಮಾಧ್ಯಮ ಮಿತ್ರರು ಅಭಿಮಾನಿಗಳು ಮತ್ತು ಹಿತೈಷಿಗಳು ನಮ್ಮ ವೈಯಕ್ತಿಕ ನಿರ್ಧಾರವನ್ನು ಗೌರವಿಸಿ ಹಿಂದೆ ನಮ್ಮ ಕೆಲಸಗಳಿಗೆ ಸಹಕಾರ ನೀಡಿದಂತೆ ಇನ್ನೂ ಮುಂದೆಯೂ ಸಹಕರಿಸಿ ಎಂದು ತಮ್ಮ instagram ಮತ್ತು Facebook ಖಾತೆಯಲ್ಲಿ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ಕರ್ನಾಟಕ ಸರ್ಕಾರ ಕ್ರೀಡಾಪಟುಗಳಿಗೆ 2% ಮೀಸಲಾತಿ; ಉತ್ತೇಜಿತ ಪ್ರಗತಿ!

ಡೈವೋರ್ಸ್ ಗೆ ಇನ್ನು ಕಾರಣ ತಿಳಿಸಲಿಲ್ಲ :-

ಡೈವೋರ್ಸ್ ಪಡೆಯಲು ಕಾರಣ ಏನು ಎಂಬುದರ ಬಗ್ಗೆ ಯಾವುದೇ ರೀತಿಯ ನಿಖರ ಕಾರಣಗಳು ಇನ್ನು ಇಬ್ಬರು ಬಹಿರಂಗ ಪಡಿಸಲಿಲ್ಲ. ಆದರೆ ಉನ್ನತ ಮೂಲಗಳ ಪ್ರಕಾರ ನಿವೇದಿತಾ ಗೌಡ ಅವರು ಓದುವ ಕಾರಣಕ್ಕೆ ವಿದೇಶಕ್ಕೆ ಹೋಗುವ ಕಾರಣದಿಂದ ಡೈವೋರ್ಸ್ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೊಂದು ಮೂಲಗಳ ಪ್ರಕಾರ ನಿವೇದಿತಾ ಗೌಡ ಅವರಿಗೆ ಮಗು ಪಡೆಯಲು ಇಷ್ಟ ಇಲ್ಲ. ಆದರೆ ಚಂದನ್ ಅವರು ಮಗುವಿನ ಆಸೆ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಆಗಿ ಡೈವೋರ್ಸ್ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಒಟ್ಟಿಗೆ ಇಬ್ಬರು ಸಿನಿಮಾ ಮಾಡುತ್ತಿದ್ದರು :- ಇಬ್ಬರಿಗೂ ನಟನೆಯ ಒಲವು ಇರುವ ಕಾರಣದಿಂದ ಹೊಸ ನಿರ್ದೇಶಕರೊಬ್ಬರ ಫಿಲ್ಮ್ ನಲ್ಲಿ ಇಬ್ಬರು ಒಟ್ಟಿಗೆ ನಟನೆ ಮಾಡಿದ್ದಾರೆ. ಫಿಲ್ಮ್ ಹೆಸರು ಕ್ಯಾಂಡಿ ಕ್ರಶ್ ಎಂದು. ಆದರೆ ಫಿಲ್ಮ್ ಶೂಟಿಂಗ್ ಯಾವ ಹಂತದಲ್ಲಿದೆ ಮತ್ತು ಡೈವೋರ್ಸ್ ತೆಗೆದುಕೊಂಡ ನಂತರ ಇಬ್ಬರು ಒಟ್ಟಿಗೆ ಸಿನಿಮಾದಲ್ಲಿ ನಟನೆ ಮಾಡುತ್ತಾರಾ ಎಂಬುದು ಇನ್ನೂ ಮುಂದೆ ತಿಳಿಯಬೇಕಿದೆ.

ಡೈವೋರ್ಸ್ ಪಡೆದ ಬಳಿಕ ಕೈ ಕೈ ಹಿಡಿದು ಹೊರಗೆ ಬಂದ ನಿವೇದಿತಾ ಮತ್ತು ಚಂದನ್ :- ಕೋರ್ಟ್ ನಲ್ಲಿ ಡೈವೋರ್ಸ್ ಪಡೆದುಕೊಂಡ ಬಳಿಕ ಕೈ ಕೈ ಹಿಡಿದು ಹೊರಗೆ ಬರುವ ದೃಶ್ಯಗಳು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ಜನರಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ನಾಲ್ಕು ವರ್ಷಗಳ ದಾಂಪತ್ಯ ಅಂತ್ಯ ಆಗಿದೆ :-

ನಾಲ್ಕು ವರ್ಷಗಳು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ದಂಪತಿಗಳು ವಿಚ್ಛೇದನ ಪಡೆದಿದ್ದಾರೆ. ಆದರೆ ಇದರ ಬಗ್ಗೆ ಈ ಹಿಂದೆ ಯಾವುದೇ ಮಾಹಿತಿಯನ್ನು ಇಬ್ಬರು ಬಹಿರಂಗ ಪಡಿಸಲಿಲ್ಲ. ಜೊತೆಗೆ ವಾರಗಳ ಮುಂಚೆ ಕೋಟಿ ಚಿತ್ರದ ಪ್ರಮೋಷನ್ ನಲ್ಲಿ ಸಹ ಇಬ್ಬರು ತಮ್ಮ ಅಭಿಪ್ರಾಯವನ್ನು ಒಟ್ಟಿಗೆ ಟೀಕಿಸಿದ್ದರು. ಈ ವೀಡಿಯೋ ಈಗ ಎಲ್ಲೆಡೆ ಹರಿದಾಡುತ್ತಿವೆ.

ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳು :- ಯಾವುದೇ ಸ್ಟಾರ್ ಅಥವಾ ಯಾವುದೇ ಸೆಲೆಬ್ರಿಟಿ ಗಳ ಸುದ್ದಿ ಬಂದರೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತದೆ. ಅದರಂತೆ ಚಂದನ್ ಮತ್ತು ನಿವೇದಿತಾ ಹಾಕಿರುವ ಪೋಸ್ಟ್ ಗೆ ಕೆಲವರು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಅಭಿಪ್ರಾಯವನ್ನು ಗೌರವಿಸಿ ನಿಮ್ಮ ಮುಂದಿನ ಜೀವನ ಉಜ್ವಲವಾಗಿ ಇರಲಿ ಎಂದು ಹಾರೈಸಿದ್ದಾರೆ . ಹಾಗೆಯೇ ಹಲವಾರು ಇವರ ನಿರ್ಧಾರದ ಬಗೆ ಟೀಕೆ ವ್ಯಕ್ತ ಪಡಿಸಿದ್ದಾರೆ. ಕೆಲವರು ನಿವೇದಿತಾ ಗೌಡ ಅವರ ನಡವಳಿಕೆಯ ಬಗ್ಗೆ ಟೀಕೆ ಮಾಡಿದ್ದಾರೆ ಇನ್ನು ಕೆಲವರು ಚಂದನ್ ಅವರ ಬಗ್ಗೆ ಟೀಕೆ ವ್ಯಕ್ತ ಪಡಿಸಿದ್ದಾರೆ. ಏನೇ ಆದರೂ ಅವರ ವ್ಯಯಕ್ತಿಕ ನಿರ್ಧಾರವನ್ನು ಗೌರವಿಸಿ ಅವರ ಮುಂದಿನ ಜೀವನ ಸುಖವಾಗಿ ಇರಲಿ ಎಂಬುದಷ್ಟೇ ಆಶಯವಾಗಿದೆ. 

ಒಂದೇ ದಿನದಲ್ಲಿ ಕೋರ್ಟ್ ಆದೇಶ ನೀಡಿದೆ ಎಂಬುದು ಎಲ್ಲರ ಪ್ರಶ್ನೆ ಆಗಿದೆ :- ಗುರುವಾರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಇವರಿಗೆ ಶುಕ್ರವಾರ ವಿಚ್ಛೇದನ ಸಿಕ್ಕಿದೆ .ಇದು ಸುಳ್ಳು ಸುದ್ದಿ ಎಂದು ಹೇಳಲಾಗುತ್ತಿತ್ತು. ಆದರೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಬಳಿಕ ಎಲ್ಲರಿಗೂ ಇದು ಖಾತ್ರಿ ಆಗಿತ್ತು. ಫ್ಯಾಮಿಲಿ ಕೋರ್ಟ್ ನಲ್ಲಿ ಸೆಕ್ಷನ್ 13 B ಪ್ರಕಾರ ದಂಪತಿಗಳಿಗೆ ಬದುಕುವುದು ತೀರಾ ಕಷ್ಟ ಎಂಬ ಸಮಯದಲ್ಲಿ ಬೇಗ ವಿಚ್ಛೇದನ ಸಿಗುತ್ತದೆ. ಇಬ್ಬರಿಗೂ ಒಮ್ಮತ ಇದ್ದರೆ ಬೇಗ divorce ಸಿಗುತ್ತದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಕೇವಲ 500 ರೂ. ಹೂಡಿಕೆ ಮಾಡುವುದರ ಮೂಲಕ, ಉತ್ತಮ ಲಾಭ ಗಳಿಸಿ! 

Sharing Is Caring:

Leave a Comment