ಮದುವೆಗೆ 60 ಲಕ್ಷ ಖರ್ಚು ಮಾಡಿ ದೊಡ್ಡ ತಪ್ಪು ಮಾಡಿಬಿಟ್ಟೆ; ಜೀವನ ಪಾಠ ಕಲಿಸಿತು ಎಂದ ಚಂದನ್ ಶೆಟ್ಟಿ!

ಸ್ಯಾಂಡಲ್ವುಡ್ ನ ಹಿನ್ನೆಲೆ ಗಾಯಕ ಚಂದನ್ ಶೆಟ್ಟಿ(Chandan Shetty) ಮತ್ತು ಬಿಗ್ ಬಾಸ್ ಸ್ಪರ್ಧಿ ಹಾಗೂ ಹಲವು ರಿಯಾಲಿಟಿ ಶೋ ಗಳಲಿ ಮಿಂಚಿದ ನಿವೇದಿತಾ ಗೌಡ ಅವರ ಡೈವೋರ್ಸ್ ವಿಚಾರ ಈಗ ದೊಡ್ಡ ಸುದ್ದಿ ಮಾಡಿದೆ. ಇಬ್ಬರು ಬಿಗ್ ಬಾಸ್ ಸ್ಪರ್ಧಿಗಳು ಆಗಿದ್ದರೂ. ತಮ್ಮ ನಡುವೆ ಪ್ರೀತಿ ಇಲ್ಲ ಎಂದು ಹೇಳುತ್ತಲೇ ಇವರು ದಸರಾ ಇವೆಂಟ್ ನಲ್ಲಿ ಎಲ್ಲರ ಎದುರಿಗೆ ನಮ್ಮ ನಡುವೆ ಪ್ರೀತಿ ಇದೆ ಎಂಬುದನ್ನು ಹೇಳಿದ್ದರು. ಆದರೆ ಈಗ ಕೆಲವು ದಿನಗಳ ಹಿಂದೆ ಇವರು ವಿಚ್ಛೇದನ ಪಡೆದುಕೊಂಡು ಮಾಧ್ಯಮಕ್ಕೆ ಇದು ನಿಜ ಎಂಬುದಾಗಿಯೂ ಪತ್ರಿಕಾಗೋಷ್ಠಿ ನಡೆಸಿ ಉತ್ತರ ನೀಡಿದ್ದಾರೆ. ಈಗ ಇದರ ಬೆನ್ನಲ್ಲೇ ಇವರಿಬ್ಬರ ಮದುವೆಯ ಬಗ್ಗೆ ಅದಾದ ನಂತರ ಆಗಿರುವ ಬೆಳವಣಿಗೆಗಳ ಬಗ್ಗೆ ಹಲವಾರು ಊಹಾಪೋಹಗಳು ಚರ್ಚೆಗಳು ಆರಂಭ ಆಗಿವೆ.

WhatsApp Group Join Now
Telegram Group Join Now

ಡೈವೋರ್ಸ್ ಕಾರಣ ಏನು?: ಇಬ್ಬರು ಒಟ್ಟಿಗೆ ಪತ್ರಿಕಾಗೋಷ್ಠಿ ನಡೆಸಿ ಡೈವೋರ್ಸ್ ಪಡೆದುಕೊಂಡಿದ್ದು ನಿಜ ಎಂದು ಹೇಳಿದ್ದಾರೆ. ಕಾರಣ ಕೇಳಿದಾಗ ನಮಗೆ ಬೇರೆ relationship ಇದೇ ಎಂಬುದೆಲ್ಲ ಸತ್ಯಕ್ಕೆ ದೂರವಾಗಿದ್ದು. ನಮ್ಮಿಬ್ಬರಲ್ಲಿ ಹೊಂದಾಣಿಕೆಯ ಕೊರತೆ ಇತ್ತು. ಇಬ್ಬರದ್ದೂ ಬೇರೆ ಬೇರೆ ಶೈಲಿಯ ಜೀವನ. ನಮ್ಮಿಬ್ಬರಲ್ಲಿ ಒಬ್ಬರಿಗೆ ಕಾಫಿ ಇಷ್ಟ ಆದರೆ ಇನ್ನೊಬ್ಬರಿಗೆ ಟೀ ಇಷ್ಟ. ಇಬ್ಬರು ನಡುವೆ ಬಹಳ ಅಂತರ ಮೂಡುವ ಮೊದಲು ನಾವು ಡೈವೋರ್ಸ್ ತೆಗೆದುಕೊಳ್ಳುವುದು ಸೂಕ್ತ ಎಂದೆನಿಸಿ ನಾವು ಈ ನಿರ್ಧಾರ ತೆಗೆದುಕೊಂಡೆವು. ನಾವು ಒಟ್ಟಿಗೆ ಇರಬೇಕು ಎಂದು ಹಲವರು ಬಾರಿ ಪ್ರಯತ್ನ ಪಟ್ಟಿದ್ದೇವೆ ಆದರೆ ಆಗುತ್ತಿಲ್ಲ ಎಂಬ ಸಮಯ ಬಂದಾಗಲೇ ನಾವು ಬೇರೆ ಆಗುವ ಬಗ್ಗೆ ಮನೆಯವರಿಗೆ ತಿಳಿಸಿದ್ದೇವೆ. ಅವರು ಸಹ ನಿಮ್ಮ ಜೀವನ ನೀವೇ ನಿರ್ಧರಿಸಿ ಎಂದು ನಮ್ಮಿಬ್ಬರ ಭಾವನೆಗೆ ನೋವುಂಟು ಮಾಡಿಲ್ಲ. ಈಗ ಅಧಿಕೃತವಾಗಿ ನಮಗೆ ಡೈವೋರ್ಸ್ ಸಿಕ್ಕಿದೆ. ಹೊಂದಾಣಿಕೆ ಆಗಲಿಲ್ಲ ಎಂಬ ಕಾರಣವನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣ ಇಲ್ಲ ಎಂದು ಚಂದನ್ ಮತ್ತು ನಿವೇದಿತಾ ಹೇಳಿದ್ದಾರೆ. 

ಅದ್ಧೂರಿ ಮದುವೆ ಆಗಿತ್ತು :- ಈಗ ಸಾಮಾನ್ಯ ಜನರು ಜೀವನದಲ್ಲಿ ಒಂದೇ ಬಾರಿ ಮದುವೆ ಆಗುವುದು ಎಂಬ ಕಾರಣದಿಂದ ಅದ್ಧೂರಿಯಾಗಿ ಮದುವೆ ಆಗುತ್ತಾರೆ. ಹಾಗಿರುವಾಗ ಸೆಲೆಬ್ರಿಟಿ ಗಳು ಮದುವೆ ಆಗುವಾಗ ಇನ್ನಷ್ಟು ಅದ್ಧೂರಿತನ ಇದ್ದೆ ಇರುತ್ತದೆ. ಎಲ್ಲ ಕಡೆಯಲ್ಲಿ ಕ್ಯೂಟ್ ಕಪಲ್ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಅದ್ಧೂರಿಯಾಗಿ ಪ್ರೇಮ ನಿವೇದನೆ ಮಾಡಿದಂತೆಯೇ ಅದ್ಧೂರಿಯಾಗಿ ಇವರು ಮದುವೆ ಆದರು. ಮೂಲಗಳ ಪ್ರಕಾರ ಚಂದನ್ ಶೆಟ್ಟಿ ಅವರ ಮದುವೆಗೆ ಬರೋಬ್ಬರಿ 60 ಲಕ್ಷ ರೂಪಾಯಿ ಖರ್ಚು ಆಗಿದೆಯಂತೆ. rapid Rashmi ಅವರ ಸಂದರ್ಶನ ಒಂದರಲ್ಲಿ ಈ ದಿನಕ್ಕೆ ನಾನು ಅಷ್ಟೆಲ್ಲಾ ಖರ್ಚು ಮಾಡಿ ಮದುವೆ ಆಗಬೇಕಿತ್ತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ: ಕಾರ್ ಲೋನ್ ತೆಗೆದುಕೊಳ್ಳುವ ಮೊದಲು ಈ ವಿಚಾರಗಳನ್ನು ನೆನಪಿಡಿ

ಜೀವನದಲ್ಲಿ ಹಲವು ಏಳು ಬೀಳುಗಳನ್ನು ಕಂಡ ಚಂದನ್ ಶೆಟ್ಟಿ(Chandan Shetty) :-

ಎಲ್ಲ ಸೆಲೆಬ್ರಿಟಿಗಳು ಗೋಲ್ಡನ್ ಸ್ಪೂನ್ ನಲ್ಲಿ ಊಟ ಮಾಡಿ ಆರಾಮಾಗಿ ಸಿನಿ ಪ್ರಪಂಚಕ್ಕೆ ಕಾಲಿಟ್ಟಿರಲ್ಲ. ಕೆಲವರು ಸೊನ್ನೆಯಿಂದ ಆರಂಭಿಸಿ ಹಲವು ಸಾಧನೆ ಮಾಡಿರುತ್ತಾರೆ. ಅಂತಹ ಕಲಾವಿದರಲ್ಲಿ. ಚಂದನ್ ಶೆಟ್ಟಿ(Chandan Shetty) ಕೂಡ ಒಬ್ಬರು. ಇಂದು ಕರ್ನಾಟಕದಾದ್ಯಂತ rapeer ಚಂದನ್ ಶೆಟ್ಟಿ ಎಂದು ಖ್ಯಾತರಾಗಿರುವ ಇವರು ಬೆಂಗಳೂರಿಗೆ ಬಂದು ಸಾಧನೆ ಮಾಡಬೇಕು ಎಂದು ಹೊರಟಾಗ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದರು. ನಂತರ ಸಿನಿ ಲೋಕಕ್ಕೆ ಕಷ್ಟ ಪಟ್ಟು ಬಂದು ಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ಬಿಗ್ ಬಾಸ್ ಇವರಿಗೆ ಜನಪ್ರಿಯತೆ ತಂದುಕೊಟ್ಟರು ಸಹ ಲಾಕ್ ಡೌನ್ ಟೈಮ್ ನಲ್ಲಿ ಹಣಕ್ಕೆ ಬರಹ ಪರದಾಡಿದರು. ಮದುವೆ ಆಗಿ ಒಳ್ಳೆಯ ಸಮಯ ಕಲಿಯಬೇಕಾಗಿದ್ದ ಸಮಯದಲ್ಲಿ ಲಾಕ್ ಡೌನ್ ಆಯಿತು . ಬುಕ್ ಆಗಿದ್ದ ಶೋ ಎಲ್ಲಾ ಒಮ್ಮೆಲೇ ನಿಂತು ಬಹಳಷ್ಟು ದಿನ ಕಷ್ಟ ಪಟ್ಟೆ ಎಂದು ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದಾರೆ.

ಸುಂದರ ದಾಂಪತ್ಯ ಜೀವನ :- ಇಬ್ಬರೂ ಒಬ್ಬರನ್ನೊಬ್ಬರು ಬಹಳ ಪ್ರೀತಿಸಿ ಇಬ್ಬರು ಒಂದೇ ಎನ್ನುವ ರೀತಿಯಲ್ಲಿ ಸುಂದರ ದಾಂಪತ್ಯ ನಡೆಸಿದವರು. ಇಬ್ಬರಿಗೂ ಇಬ್ಬರ ವೃತ್ತಿಯ ಬಗ್ಗೆ ಅಪಾರ ಗೌರವ ಇದೆ. ಇಬ್ಬರೂ ಒಬ್ಬರಿಗೆ ಇಬ್ಬರು ಬದುಕುತ್ತಿದ್ದೇವೆ ಎಂದು ಅನ್ಯೋನ್ಯವಾಗಿ ಬದುಕಿದವರು. ರಾಜ ರಾಣಿ ರಿಯಾಲಿಟಿ ಶೋ ದಲ್ಲಿ ಇವರನ್ನು ನೋಡಿ ದಂಪತಿಗಳು ಎಂದರೆ ಹೀಗೆ ಇರಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು.

ಮನ:ಪೂರ್ವಕವಾಗಿಯೇ ದೂರವಾಗಿ ಹೊಸ ಜೀವನ ಕಂಡುಕೊಂಡಿದ್ದಾರೆ: ಯಾರದೇ ಒತ್ತಡ ಇರದೆ ತಮ್ಮ ಸ್ವ ಇಚ್ಛೆಯಿಂದ ದೂರವಾಗಿ ಈಗ ಚಂದನ್ ಶೆಟ್ಟಿ ಅವರು ಸಾಹಿತ್ಯ ಹಾಗೂ ಸಂಗೀತದಲ್ಲಿ ತಮ್ಮ ಜೀವನವನ್ನು ಕಂಡುಕೊಳ್ಳುತ್ತಿದ್ದಾರೆ ಇತ್ತ ನಿವೇದಿತಾ ಅವರು ರಿಲ್ಸ್ ಮಾಡುತ್ತಾ ತಮ್ಮದೇ ರೀತಿಯಲ್ಲಿ ಹೊಸ ಜೀವನ ನಡೆಸುತ್ತಿದ್ದಾರೆ.

2015 ರಿಂದ ಉತ್ತಗಾಂಕ್ಕೆ ಏರಿದ ಚಂದನ್ ಶೆಟ್ಟಿ :-

2015 ರ ವೇಳೆಗೆ ಚಂದನ್ ಶೆಟ್ಟಿ ರಾಜ್ಯದಲ್ಲಿ ಹೆಸರುವಾಸಿ ಸಿಂಗರ್ ಆಗಿದ್ದರು. ಎಲ್ಲಿ ನೋಡಿದರೂ ಇವರ ಹಾಡುಗಳು ಕೇಳುತ್ತಿದ್ದವು. ಮ್ಯೂಸಿಕ್ ಮಾಡಲು ಡೈರೆಕ್ಟರ್ ಗಳು ಇವರ ಬಳಿ ಬರುತ್ತಿದ್ದರು. ಅಂಥ ಸಮಯದಲ್ಲಿ ಒಂದೊಂದು ಹಾಡಿಗೂ ಇವರು ಲಕ್ಷಾಂತರ ರೂಪಾಯಿ ಸಂಭಾವನೆ ನಡೆಯುತ್ತಿದ್ದರೂ. ಉದ್ಯಮದಲ್ಲಿ ಉತ್ತಮ ಮಟ್ಟದಲ್ಲಿ ಇರುವಾಗಲೇ ನಿವೇದಿತಾ ಅವರನ್ನು ಮದುವೆ ಆದರೂ. ಇದಕ್ಕೆ ಇವರು ಮದುವೆಗೆ ಲಕ್ಷ ಲಕ್ಷ ಹಣ ಹಾಕಿ ಎಲ್ಲರ ಕಣ್ಣು ಕುಟ್ಟುವಂತೆ ಮದುವೆ ಅದರು.

ಜೀವನದಲ್ಲಿ ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ :- ಪ್ರತಿ ಒಬ್ಬರ ಜೀವನದಲ್ಲಿ ಎಲ್ಲವೂ ಅಂದುಕೊಂಡ ರೀತಿಯಲ್ಲಿ ಆಗುವುದಿಲ್ಲ. ಮದುವೆ ಆಗಿ ಜೀವನದ ಸಂತೋಷ ಕ್ಷಣಗಳನ್ನು ಕಳೆದು ನೂರಾರು ವರ್ಷ ಜೊತೆಯಾಗಿ ಬದುಕುವೆ ಎಂಬುದು ಏಳು ಹೆಜ್ಜೆಗಳನ್ನು ಹಾಕಿ ಜೀವನ ಸುಖವಾಗಿ ಇದೆ ಎಂದಾಗಲೇ ಕಷ್ಟದ ಸಾಲುಗಳು ಬರುತ್ತೆ ಎಂದು ಚಂದನ್ ಶೆಟ್ಟಿ ಅವರು ಭಾವುಕ ನುಡಿಗಳನ್ನು ಆಡಿದ್ದಾರೆ. ಕೊರೊನಾ ಮಹಾಮಾರಿ ಬಂದು ಜೀವನದಲ್ಲಿ ಒಂದಿಷ್ಟು ಕಷ್ಟಗಳು ಬಂದವು ಎಲ್ಲವನ್ನೂ ಎದುರಿಸಿ ಈಗ ಜೀವನದಲ್ಲಿ ಸುಖವಾಗಿ ಇದ್ದೇನೆ ಎಂದುಕೊಳ್ಳುವ ಸಮಯದಲ್ಲಿ ಇಬ್ಬರು ಜೊತೆಯಾಗಿ ಇದ್ದವರು ಬೇರೆ ಬೇರೆ ಯಾಗಿ ಜೀವನ ಮಾಡುವ ನಿರ್ಧಾರ ತೆಗೆದುಕೊಳ್ಳ ಬೇಕಾದ ಪರಿಸ್ಥಿತಿ ಬಂದಿತ್ತು ಎಂದು ಚಂದನ್ ಅವರು ಹೇಳಿದ್ದಾರೆ.

ಡೈವೋರ್ಸ್ ಬಳಿಕವೂ ನಾವು ಸ್ನೇಹಿತರು :-

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರು ಸಂದರ್ಶನದಲ್ಲಿ ನಾವಿಬ್ಬರೂ ಮೊದಲಿನಿಂದಲೂ ಸ್ನೇಹಿತರು ಈಗಲೂ ಸಹ ಸ್ನೇಹಿತರು ನಾವು ಜಗಳ ಅಡಿ ಕಿತ್ತಾಡಿ ದೂರವಾಗಲಿಲ್ಲ.ಹಾಗಿರುವಾಗ ಈಗಲೂ ನಾವಿಬ್ಬರೂ ಸ್ನೇಹಿತರು. ಮುಂಚಿನ ಹಾಗೆಯೇ ಇಬ್ಬರಿಗೆ ಒಬ್ಬರ ಮೇಲೆ ಅದೇ ಗೌರವ ಈಗಲೂ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: PPF ಹಾಗೂ SSY ಯೋಜನೆಗಳಲ್ಲಿ ಯಾವ ಯಾವ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೆಚ್ಚು ಉಪಯುಕ್ತ ಎಂಬುದನ್ನು ತಿಳಿಯೋಣ.

Sharing Is Caring:

Leave a Comment