ಯಾರು ಈ ಪವಿತ್ರ ಗೌಡ? ಪವಿತ್ರ ಗೌಡ ಅವರ ಮೊದಲನೇ ಗಂಡ ದೂರವಾಗಿದ್ದು ಏಕೆ?

ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 13 ಜನರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಈ ಹಿಂದೆಯೂ ಪವಿತ್ರ ಗೌಡ ಅವರ ಜೊತೆ ನಟ ದರ್ಶನ್ ಅವರ ಹೆಸರು ಕೇಳಿ ಬಂದಿತ್ತು. ಆದರೆ ಅವು ಊಹಾಪೋಹಗಳು ಇಬ್ಬರು ಸ್ನೇಹಿತರು ಎಂಬ ಮಾತುಗಳು ಕೇಳಿ ಬಂದವು. ಆದರೆ ಈಗ ರೇಣುಕಾ ಸ್ವಾಮಿ ಅವರ ಕೊಲೆ ವಿಚಾರವಾಗಿ ಪವಿತ್ರ ಗೌಡ ಮತ್ತು ದರ್ಶನ್ ಇಬ್ಬರು ಸಹ ಕ್ಲೋಸ್ ಆಗಿ ಇದ್ದಾರೆ ಎಂಬುದು ಸಾಬೀತು ಆಗಿದೆ. ಇದರ ಬೆನ್ನಲ್ಲೇ ಈಗ ಪವಿತ್ರ ಗೌಡ ಅವರ ವೈಯಕ್ತಿಕ ಜೀವನದ ಬಗ್ಗೆ ಒಂದಿಷ್ಟು ವಿಷಯಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಈಗಾಗಲೇ ಪವಿತ್ರ ಗೌಡ ಅವರಿಗೆ ಮದುವೆ ಆಗಿದ್ದು ಡೈವೋರ್ಸ್ ಆಗಿದೆ ಎಂಬ ವಿಚಾರ ಹರಿದಾಡುತ್ತಿದೆ. ಹಾಗಾದರೆ ಅವರ ಮೊದಲ ಪತಿ ಯಾರು ಹಾಗೂ ಡೈವೋರ್ಸ್ ಗೆ ಕಾರಣ ಏನಿತ್ತು ಎಂಬ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿವೆ.

WhatsApp Group Join Now
Telegram Group Join Now

ಪವಿತ್ರ ಗೌಡ ಅವರ ಮೊದಲ ಪತಿ ಯಾರು?: ಪವಿತ್ರ ಗೌಡ ಅವರಿಗೆ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಆಗಿತ್ತು ಎನ್ನಲಾಗುತ್ತಿದೆ. ಅವರಿಗೆ 18 ವರ್ಷ ವಯಸ್ಸಿಗೆ ಮದುವೆ ಆಗಿತ್ತು. ಇವರು ಪ್ರೇಮ ವಿವಾಹ ಆಗಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಇವರ ಪತಿಯ ಹೆಸರು ಸಂಜಯ್ ಸಿಂಗ್. ಇವರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ಪ್ರೀತಿಸಿ ಮದುವೆ ಆದ ಇವರು ವಯಕ್ತಿಕ ವೈ ಮನಸ್ಸಿನ ಕಾರಣದಿಂದ ದೂರ ಆಗಿದ್ದರೆ. ಇವರಿಗೆ ಖುಷಿ ಗೌಡ ಎಂಬ ಮಗಳು ಸಹಾ ಇದ್ದಾಳೆ.

ಪವಿತ್ರ ಗೌಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಹೇಗೆ?

ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 2013 ರಲ್ಲಿ ಬಿಡುಗಡೆ ಆದ ಛತ್ರಿಗಳು ಸಾರ್ ಛತ್ರಿಗಳು ಸಿನಿಮಾ ಮೂಲಕ. ನಂತರ ಅಗಮ್ಯ ಎಂಬ ಚಿತ್ರದಲ್ಲಿ ನಟಿಸಿದರು. ನಂತರ ಸಾ. ರಾ. ಗೋವಿಂದ್ ಅವರ ಪುತ್ರ ಅನುಪ್ ಗೆ ನಾಯಕ ನಟಿಯಾಗಿ ಸಾಗುವ ದಾರಿಯಲ್ಲಿ ಎಂಬ ಚಿತ್ರದಲ್ಲಿ ನಟಿಸಿದರು. ನಂತರ ಇವರಿಗೆ 2016 ರಲ್ಲಿ ತಮಿಳು ಚಿತ್ರರಂಗದಿಂದ ಆಫರ್ ಬಂತು. ಅಲ್ಲಿ 52321 ಎಂಬ ಸಿನಿಮಾದಲ್ಲಿ ನಟನೆ ಮಾಡಿದರು. ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಪ್ರೀತಿ ಕಿತಾಬು ಎಂಬ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ನಟನೆ ಮಾಡಿದರು. ಆದರೆ ಇವರು ನಟಿಸಿರುವ ಚಿತ್ರಗಳಿಂದ ಇವರಿಗೆ ಯಾವುದೇ ಹೆಸರು ತಂದುಕೊಡಲು ಇಲ್ಲ.

ನಟ ದರ್ಶನ್ ಮತ್ತು ಪವಿತ್ರ ಗೌಡ ಅವರ ಪರಿಚಯ ಹೇಗೆ?

ಒಬ್ಬರು ಒಂದೇ ಇಂಡಸ್ಟ್ರಿ ಯಲ್ಲಿ ಕೆಲಸ ಮಾಡುವ ಕಾರಣದಿಂದ ಇವರು ಭೇಟಿ ಆದರು. 2024-15 ನೇ ಇಸವಿಯಲ್ಲಿ ಇವರಿಬ್ಬರೂ ಕ್ಲೋಸ್ ಆದರು. ಇದು ಚಿತ್ರರಂಗದಲ್ಲಿ ಬಹಳ ಸುದ್ದಿಯಾಗಿತ್ತು. ಇದೆ ಸಮಯದಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಪ್ರಕರಣ ಎಲ್ಲೆಡೆ ಸುದ್ದಿಯಾಗಿ ಇಬ್ಬರು ಬೇರೆ ಬೇರೆ ಆಗಿದ್ದರು.

ಇದನ್ನೂ ಓದಿ: ಬಜಾಜ್ CNG ಬೈಕ್ ಜುಲೈ 17ಕ್ಕೆ ಬಿಡುಗಡೆ; ಎಲ್ಲಾ ಬೈಕ್ ಗಳಿಗೆ ನಡುಕ ಹುಟ್ಟಿಸಿದ ಬಜಾಜ್

ಪವಿತ್ರಾ ಗೌಡ ವಿರುದ್ಧ ಸಿಡಿಮಿಡಿಗೊಂಡಿದ್ದ ವಿಜಯಲಕ್ಷ್ಮಿ :-

ಹಲವು ಬಾರಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪವಿತ್ರಾ ಗೌಡ ವಿರುದ್ಧ ಸಿಡಿಮಿಡಿ ಗೊಂಡಿದ್ದಾರೆ. ಪವಿತ್ರ ಗೌಡ ಅವರು 2017ರಲ್ಲಿ ತಮ್ಮ ಟ್ವಿಟ್ಟರ್ ಮತ್ತು ಫೇಸ್ಬುಕ್ ಖಾತೆಯಲ್ಲಿ ದರ್ಶನ್ ಜೊತೆಗೆ ಇರುವ ಫೋಟೋವನ್ನು ತಮ್ಮ ಪ್ರೊಫೈಲ್ ಗೆ ಹಾಕಿಕೊಂಡಿದ್ದರು. ಈ ಫೋಟೋ ಹಾಕಿದ ಬಳಿಕ ದರ್ಶನ ಅಭಿಮಾನಿಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಫೋಟೋ ಚೇಂಜ್ ಮಾಡಿದ್ದರು ಪವಿತ್ರ ಗೌಡ. ಪವಿತ್ರ ಗೌಡ ಅವರು ದರ್ಶನ್ ಜೊತೆ ಇರುವ ಫೋಟೋ ವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡರೆ ಅಥವಾ ಏನಾದರೂ ಬರೆದುಕೊಂಡರೆ ಹಾಗೂ ಬೇರೆ ಯಾರೇ ಆದರೂ ದರ್ಶನ್ ಮತ್ತು ಪವಿತ್ರಾ ಅವರ ಫೋಟೋ ಶೇರ್ ಮಾಡಿದರೂ ಸಹ ವಿಜಯಲಕ್ಷ್ಮಿ ಅವರು ಸಹಿಸುವುದಿಲ್ಲ.

2023 ರಲ್ಲಿ ದರ್ಶನ್ ಅವರ ಹುಟ್ಟುಹಬ್ಬದ ಸೆಲೆಬ್ರೇಷನ್ ಫೋಟೋ ಒಂದನ್ನು ಜೊತೆ ಜೊತೆಯಲಿ ಧಾರವಹಿಯಿಂದ ಖ್ಯಾತಿ ಪಡೆದ ಪವಿತ್ರಾ ಗೌಡ ಅವರ ಸ್ನೇಹಿತೆ ಮೇಘ ಶೆಟ್ಟಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಆಗ ಮೇಘ ಶೆಟ್ಟಿ ವಿರುದ್ಧ ಕೋಪ ಮಾಡಿಕೊಂಡಿದ್ದರು ವಿಜಯಲಕ್ಷ್ಮಿ. ನಂತರ 2024 ರಲ್ಲಿ ಪವಿತ್ರಾ ಅವರು ದರ್ಶನ್ ಜೊತೆಗೆ ಇರುವ ವೀಡಿಯೋ ಒಂದನ್ನು ಹಂಚಿಕೊಂಡು ನಮ್ಮ ಸಂಬಂಧವೂ 10 ವರ್ಷಗಳನ್ನು ಪೂರೈಸಿದೆ ಎಂದು ಬರೆದುಕೊಂಡಿದ್ದರು. ಆಗ ವಿಜಯಲಕ್ಷ್ಮಿ ಅವರು ಕೋಪಗೊಂಡು ಪವಿತ್ರಾ ಗೌಡ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದರು. 2018 ರಲ್ಲಿ ದರ್ಶನ್ ತಾಯಿ ಮೀನಾ ತೂಗುದೀಪ್ ಮತ್ತು ದರ್ಶನ್ ಅವರ ತಂಗಿ ದಿವ್ಯ ಅವರ ಜೊತೆಗೆ ಇರುವ ಫೋಟೋ ಗಳನ್ನು ಹಂಚಿಕೊಂಡಿದ್ದರು.

ಸ್ವಂತ ಬ್ಯುಸಿನೆಸ್ ಶುರುಮಾಡಿದ ಪವಿತ್ರ ಗೌಡ :- ಚಿತ್ರರಂಗದಲ್ಲಿ ಯಶಸ್ವಿ ಕಾಣದೆ ಇರುವಾಗ ಇವರು ಸ್ವಂತ ಬ್ಯುಸಿನೆಸ್ ಸ್ಟಾರ್ಟ್ ಮಾಡಿದರು. ಇವರು ಇವರದ್ದೇ ಆದ ಸ್ವಂತ ಉದ್ಯಮ ಹೊಂದಿದ್ದಾರೆ. ರೆಡ್ ಕಾರ್ಪೆಟ್ ಸ್ಟುಡಿಯೋ ಒಂದನ್ನು ಓಪನ್ ಮಾಡಿದ್ದಾರೆ. ಇದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇದೆ. ಈ ಬೋಟಿಕ್ ಸ್ಟುಡಿಯೋದಲ್ಲಿ ಸಿನಿಮಾ ರಂಗದ ನಟಿಯರಿಗೆ ಕಾರ್ಯಕ್ರಮಗಳಿಗೆ ಡ್ರೆಸ್ ಮತ್ತು ಸೀರೆ ಗಳನ್ನು ಡಿಸೈನ್ ಮಾಡುವುದು ಇವರ ಕೆಲಸ ಆಗಿದೆ.

ಚಿತ್ರದುರ್ಗ ಮೂಲದ ವ್ಯಕ್ತಿ ಕೊಲೆ ಆರೋಪ :-

ಪವಿತ್ರ ಗೌಡ ಅವರಿಗೆ ಅಶ್ಲೀಲ ವಿಡಿಯೋಗಳನ್ನು ಕಳಿಸಿದ್ದ ಎಂದು ಹೇಳಲಾಗಿರುವ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬುವವರನ್ನು ಕೊಲೆ ಮಾಡಿರುವ ಆರೋಪವೂ ಪವಿತ್ರಾ ಗೌಡ ಮತ್ತು ದರ್ಶನ ಹಾಗೂ ಇನ್ನಿತರ ಸಹಚರರ ವಿರುದ್ಧ ಕೇಳಿ ಬಂದಿದೆ.

ದರ್ಶನ್ ಅವರನ್ನು unfollow ಮಾಡಿದ ವಿಜಯಲಕ್ಷ್ಮಿ :-

ಕೊಲೆ ಆರೋಪ ಕೇಳಿ ಬಂದ ಬೆನ್ನಲ್ಲೇ ತಮ್ಮ ಸೋಷಿಯಲ್ ಮೀಡಿಯ ಖಾತೆಯಲ್ಲಿ ದರ್ಶನ್ ಅವರನ್ನು unfollow ಮಾಡಿದ್ದಾರೆ ಹಾಗೂ ಪ್ರೊಫೈಲ್ ಫೋಟೋ ಸಹ ತೆಗೆದು ಹಾಕಿದ್ದಾರೆ. ವಿಜಯಲಕ್ಷ್ಮಿ ಅವರ ಈ ನಡೆ ಸಹಜವಾಗಿ ಕಂಡರು ದರ್ಶನ ಅವರಿಂದ ಅಂತರ ಕಾಯ್ದುಕೊಂಡಂತೆ ಅನ್ನಿಸುತ್ತದೆ.

ದರ್ಶನ್ ಪರ ಮತ್ತು ವಿರುದ್ಧ ಸೋಷಿಯಲ್ ಮೀಡಿಯದಲ್ಲಿ ಚರ್ಚೆಗಳು ನಡೆಯುತ್ತಿವೆ :- ಕೊಲೆ ಆರೋಪ ಎದುರಿಸುತ್ತಿರುವ ದರ್ಶನ್ ಅವರ ಪರವಾಗಿ ಕೆಲವು ಅಭಿಮಾನಿಗಳು ಅವರ ತಪ್ಪು ಏನು ಹಾಗೂ ಇದು ಕೇವಲ ಆರೋಪ ಅಷ್ಟೇ ಅವರಿಗೂ ಇದಕ್ಕೂ ಸಂಬಂಧ ಕಲ್ಪಿಸಿ ಅವರ ತೇಜೋವಧೆ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ ಹಲವಾರು ಜನರು ದರ್ಶನ್ ಅವರಿಗೆ ಶಿಕ್ಷೆ ಆಗಬೇಕು ಅವರನ್ನು ಚಿತ್ರರಂಗದಿಂದ ದೂರ ಇಡೀ ಎಂಬುದಾಗಿ ಹೇಳುತ್ತಿದ್ದಾರೆ. ಆದರೆ ಈ ಪ್ರಕರಣದ ಬಗ್ಗೆ ಇಲ್ಲಿಯ ವರೆಗೆ ಚಿತ್ರರಂಗದ ಯಾವುದೇ ಸ್ಟಾರ್ ನಟನೂ ಸಹ ಹೇಳಿಕೆ ನೀಡಲಿಲ್ಲ.

Sharing Is Caring:

Leave a Comment